Visit to the house damaged in rain at Chettimani, 17/08/2022
ಚೆಟ್ಟಿಮಾನಿ ಬಳಿ ಮಳೆಯಿಂದ ಮನೆ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭ. ಕೊಡಗು ಜಿಲ್ಲೆಯ ವಿವಿಧ ಕಡೆ ಭಾರಿ ಮಳೆಯಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ.
ಕೊಡಗಿನ ಬಗ್ಗೆ ಆಡಳಿತದ ನಿರ್ಲಕ್ಷ್ಯ ಮುಂದುವರೆದಿದೆ. ವೈಯಕ್ತಿಕವಾಗಿ ನಾನು ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಜನರ ಸಹಾಯಕ್ಕೆ ಮುಂದಾಗಿದ್ದೇವೆ. ಆದರೆ ಸರ್ಕಾರದ ನಿರ್ಲಕ್ಷ್ಯ ನಮಗೆ ಬೇಸರ ತಂದಿದೆ.
ಹೋರಾಟಕ್ಕೆ ಮಾತ್ರ ಮಣಿಯುವ ಮೊಂಡತನ ಆಡಳಿತ ತೋರುತ್ತಿದೆ. ಜನರ ಆಕ್ರೋಶಕ್ಕೆ ಗುರಿಯಾಗದೆ ನೊಂದ ಜನರ ಸಹಾಯಕ್ಕೆ ಮುಂದಾಗುವಂತೆ ನಮ್ಮ ಒತ್ತಾಯ, ಹೋರಾಟ ಮುಂದುವರೆದಿದೆ.
#JaiHind #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Floods #Rains #Landslides

Celebrating 75 Years of Indian Independence, 16/08/2022
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆಂದೇ ಸ್ಥಾಪನೆಯಾದ ಪಕ್ಷ ನಮ್ಮದು. ಲಕ್ಷಾಂತರ ಜನರನ್ನು ಒಗ್ಗೂಡಿಸಿ, ಅವರಲ್ಲಿ ದೇಶಪ್ರೇಮವನ್ನು ಬಿತ್ತಿ, ಹೋರಾಟದಿಂದ ಪಡೆದ ಸ್ವಾತಂತ್ರ್ಯ ನಮ್ಮದು. ಕಳೆದ 75 ವರ್ಷಗಳಿಂದ ಈ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ಪ್ರಜೆಯ ಏಳಿಗೆಗೆ ಸದ್ಬಳಕೆ ಮಾಡುವ ಕೆಲಸ ನಿರಂತರವಾಗಿ ನಡೆದಿದೆ.
ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮವನ್ನು ಪಕ್ಷವು ಅದ್ದೂರಿಯಾಗಿ ಸಂಭ್ರಮಿಸಿ, ದೇಶಕ್ಕೆ ಮಾದರಿಯಾಯಿತು. ಸಂಗೊಳ್ಳಿ ರಾಯಣ್ಣ ವೃತ್ತ-ಫ್ರೀಡಂ ಪಾರ್ಕ್ ಇಂದ ಆರಂಭವಾಗಿ ಸ್ವಾತಂತ್ರ್ಯ ನಡಿಗೆ ನ್ಯಾಷನಲ್ ಕಾಲೇಜ್ ಮೈದಾನದವರೆಗೂ ಚಾಚಿತ್ತು. ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡು, ಸ್ವಾತಂತ್ರ್ಯ ನದಿಗೆಯನ್ನು ಯಶಸ್ವಿ ಮಾಡಿದರು.
ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿಗರು, ಮುಖಂಡರು, ಹಿತೈಷಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ನಡಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಶುಭಾಶಯಗಳು.
ಸ್ವಾತಂತ್ರ್ಯ ಒಂದೇ ದಿನದ ಸಂಭ್ರಮವಲ್ಲ. ಪ್ರತಿದಿನವೂ ನಮ್ಮ ಹಿಂದಿನವರ ತ್ಯಾಗ ಬಲಿದಾನ ನೆನೆಯುತ್ತ, ಸ್ವಾತಂತ್ರ್ಯವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ.
#IndependenceDay2022 #JaiHind #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery

Let's pledge to protect our freedom on #IndependenceDay2022, 15/08/2022
On the 75th anniversary of our #TrystWithDestiny let's pledge to protect our freedom on #IndependenceDay2022
ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನಮ್ಮೆಲ್ಲರ ಸಾಂವಿಧಾನಿಕ ಸ್ವಾತಂತ್ರ್ಯವನ್ನು ರಕ್ಷಿಸುವ, ದೇಶದ ಸಂವಿಧಾನವನ್ನು ಕಾಪಾಡುವ, ಜನರ ನಿಜವಾದ ಹಕ್ಕುಗಳನ್ನು ಪ್ರತಿಪಾದಿಸುವ ಸಂಕಲ್ಪವನ್ನು ಮಾಡೋಣ. #JaiHind

Visit to Talacauvery, 14/08/2022
ಭಾಗಮಂಡಲದಲ್ಲಿ ತಲಕಾವೇರಿ ಕ್ಷೇತ್ರಕ್ಕೆ ಭೇಟಿಕೊಟ್ಟು, ತಾಯಿ ಕಾವೇರಿಯ ಆಶೀರ್ವಾದ ಪಡೆದ ಕ್ಷಣಗಳು.
ಕೊಡಗಿನ ಜೀವಸಂಕುಲದ ದೇವತೆ, ಕೊಡಗಿನ ಜನರ ಕುಲದೇವತೆ ಕಾವೇರಿ ತಾಯಿಯು ಸಾವಿರಾರು ವರ್ಷಗಳಿಂದ ನಮ್ಮನ್ನು ಸಲುಹಿದ್ದಾಳೆ. ತಾಯಿಯ ಸನ್ನಿಧಿಗೆ ಭೇಟಿಕೊಡುವುದೇ ಪುಣ್ಯದ ಕೆಲಸ.
ಈ ವರ್ಷವೂ, ಜನರ ಪಾಲಿಗೆ ವರವಾಗಿ, ರೈತರ ಪಾಲಿಗೆ ಜೀವನದಿಯಾಗಿ ಸಕಲ ಜನಕ್ಕೂ ಒಳ್ಳೆಯದಾಗಲಿ ಎಂದು ಬೇಡಿಕೊಂಡೇ. ನಾಡಿನ ಸಮಸ್ತ ಜನರ ರಕ್ಷಣೆಗೆ ದೇವರಲ್ಲಿ ಪ್ರಾರ್ಥಿಸಿದೆ. ಜೊತೆಗೆ ಭಗಂಡೇಶ್ವರ ದೇವಸ್ಥಾನಕ್ಕೆ ಭೇಟಿಕೊಟ್ಟು, ಪೂಜೆ ಸಲ್ಲಿಸಿದೆ.
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery

Program on BTV, 13/08/2022
#law #lawyer #karnatakalawyer #kodava #kodagu #virajpet