I pray that the Belagavi winter session which starts from today will be successful and solved to the problems of the people of the state., 07/12/2025
ಇಂದಿನಿಂದ ಆರಂಭವಾಗುವ ಬೆಳಗಾವಿ ಚಳಿಗಾಲ ಅಧಿವೇಶನವು ಯಶಸ್ವಿಯಾಗಿ ನಾಡಿನ ಜನರ ಸಮಸ್ಯೆಗೆ ಪರಿಹಾರ ಸಿಗುವಂತಾಗಲಿ ಎಂದು ಪ್ರಾಥಿಸುತ್ತೇನೆ.

A.K.S Legal and Ray Firm jointly organized the “Football Match Between Law Firms” in Bangalore, an event proudly hosted by two of the city’s esteemed legal establishments. We were greatly honored by the presence of Hon’ble Supreme Court Justice Arvind Kum, 07/12/2025
ಬೆಂಗಳೂರಿನ ಪ್ರತಿಷ್ಠಿತ ಕಾನೂನು ಸಂಸ್ಥೆಯಾದ ಎ.ಕೆ.ಎಸ್ ಲೀಗಲ್ ಹಾಗೂ ರೇ ಸಂಸ್ಥೆಯು ಜಂಟಿಯಾಗಿ ಆಯೋಜಿಸಿದ, "ಕಾನೂನು ಸಂಸ್ಥೆಗಳ ನಡುವಿನ ಫುಟ್ಬಾಲ್ ಪಂದ್ಯಾಟ" ಬೆಂಗಳೂರಿನಲ್ಲಿ ಜರಗಿತು.ಈ ಪಂದ್ಯಾಟವನ್ನು ಉದ್ಘಾಟಿಸಲು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜಸ್ಟಿಸ್ ಅರವಿಂದ್ ಕುಮಾರ್ ರವರು ಆಗಮಿಸಿದ್ದು ನಮಗೆಲ್ಲ ಹೆಮ್ಮೆಯ ಸಂಗತಿ. ಸುಮಾರು 40ಕ್ಕೂ ಅಧಿಕ ಕಾನೂನು ಸಂಸ್ಥೆಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಸರ್ವೋತ್ತಮ ತಂಡವು ಜಯಗಳಿಸಲಿ ಎಂಬ ಶುಭಾಶಯ ಕೋರುತ್ತೇನೆ.ಈ ಪಂದ್ಯಾಟವು ವಕೀಲರಿಗೆ ಹಬ್ಬದ ವಾತಾವರಣ ನಿರ್ಮಿಸಿದ್ದು, ಹಳೆ ಸ್ನೇಹಿತರ ಸಮ್ಮಿಲನ ಹಾಗೂ ಹೊಸಬರ ಪರಿಚಯಕ್ಕೆ ವೇದಿಕೆಯಾಗಿದೆ.
ಈ ಸಂದರ್ಭದಲ್ಲಿ, ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಉಪಸ್ಥಿತರಿದ್ದರು.

Inspection, land pooja and inauguration of various works in Virajpet Taluk Maldare Grama Panchayat of Virajpet Legislative Assembly constituency., 07/12/2025
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕು ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳ ವೀಕ್ಷಣೆ, ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರೆವೇರಿಸಲಾಯಿತು.

On the flag day of Indian armed forces Let us remember the sacrifice, sacrifice and service of our brave soldiers who are working day and night for the protection of the country., 07/12/2025
ಭಾರತೀಯ ಸಶಸ್ತ್ರ ಪಡೆಗಳ ಧ್ವಜ ದಿನದಂದು
ದೇಶದ ರಕ್ಷಣೆಗಾಗಿ ಹಗಲಿರಳು ಶ್ರಮಿಸುತ್ತಿರುವ ನಮ್ಮ ವೀರಯೋಧರ ತ್ಯಾಗ, ಬಲಿದಾನ ಹಾಗೂ ಸೇವೆಯನ್ನು ಸ್ಮರಿಸೋಣ.

Bhoomi pooja was conducted for the newly constructed Mekeri bus accommodation of Madikeri Taluk, Kaggodlu's Hookadu Kari Chamundi Temple of Virajpet assembly constituency., 06/12/2025
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಕಗ್ಗೋಡ್ಲುವಿನ ಹೂಕಾಡುವಿನ ಕರಿ ಚಾಮುಂಡಿ ದೇವಸ್ಥಾನಕ್ಕೆ ಹೋಗುವ ರಸ್ತೆ ಹಾಗೂ ನೂತನವಾಗಿ ನಿರ್ಮಾಣವಾಗುತ್ತಿರುವ ಮೇಕೇರಿ ಬಸ್ ತಂಗುದಾಣಕ್ಕೆ ಭೂಮಿ ಪೂಜೆ ನೆರೆವೇರಿಸಲಾಯಿತು.
